ನೀನು ಹೇಗೆ ಹುಟ್ಟಿದೆ ಅನ್ನೋದು ಮುಖ್ಯ ಅಲ್ಲ, ಸಾಯಬೇಕಾದ್ರೆ ದೊಡ್ಡ ಶ್ರೀಮಂತನಾಗಿ ಸಾಯಬೇಕು ಅದು ಹೇಗಾದ್ರೂ ಆಗಿರಲಿ. ಹೀಗೆ ಹೇಳುವ ತಾಯಿಯ ಮಾತನ್ನು ನಿಜ ಮಾಡಲು ಹೊರಡುವ ಹುಡುಗನ ಕಥೆ ಈ ಕೆಜಿಎಫ್.
ಬಂಗಾರ ಅಗೆಯಲು ಕಾರ್ಮಿಕರನ್ನು ಬಳಸಿಕೊಂಡ ರೀತಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ನಮ್ಮ ಮೈ ಮೇಲೆ ನಳ ನಳಿಸುವ ಬಂಗಾರ ಹಿಂದೆ ನೂರಾರು ಜನರ ನೋವಿದೆ ಎಂಬುದನ್ನು ಕಾಲ್ಪನಿಕ ಎಂದು ಹೇಳಿಯೇ ನೈಜ ಕಥೆಯನ್ನು ನಮ್ಮ ಮುಂದೆ ಬಿಚ್ಚಿಡುತ್ತಾರೆ
ಎರಡನೇ ಭಾಗವನ್ನು ನೋಡಲು ಕಾಯುತ್ತಿದ್ದೇವೆ ಎಂದು ಕೆಲವರು ಹೇಳಿದ್ದು, ಭಾರತೀಯ ಚಿತ್ರರಂಗದಲ್ಲೇ ಅತ್ಯುತ್ತಮ ಸೆಕೆಂಡ್ ಆಫ್ ಸಿನಿಮಾ. ಕಣ್ಣು ಒಂಚೂರು ಅತ್ತಿತ್ತ ಹೊರಳಿಸಲು ಬಿಡಲ್ಲ. ಕ್ಲೈಮ್ಯಾಕ್ಸ್ ಮ್ಯಾಜಿಕ್ ಸೂಪರ್ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಭಾವನಾತ್ಮಕ ಸನ್ನಿವೇಶಗಳಿಗೆ ಹಾಗೂ ಕಥೆಗೆ ಪೂರಕವಾಗಿ ರವಿ ಬಸ್ರೂರ್ ಅವರ ಸಂಗೀತ ಹಿತವಾಗಿದೆ. ಹಲವಾರು ಕಡೆ ಇವರ ಸಂಗೀತವೇ ಪ್ರಮುಖ ಆಕರ್ಷಣೆ ಎನ್ನಬಹುದು.
ಟ್ವಿಟರ್ನಲ್ಲಿ ಅಭಿಮಾನಿಗಳ ಉತ್ತರ ನೋಡಿ 👇👇
ಒಟ್ಟಾರೆ ಕನ್ನಡದ ಎಲ್ಲ ಚಿತ್ರಗಳ ದಾಖಲೆಯನ್ನು ಮುರಿದ K G F .
ಇಂಥ ಕನ್ನಡ ಚಿತ್ರ ಮಿಸ್ ಮಾಡ್ಕೋಬೇಡಿ ಹತ್ತಿರದ ಚಿತ್ರ ಮಂದಿರಕ್ಕೆ ಹೋಗಿ ಚಿತ್ರವನ್ನು ನೋಡಿ .
Comments
Post a Comment